ಆರ್ ಅಶೋಕ್ ತುಟಿಯ ಬಣ್ಣ ಬಿಳಿಯಾಗಿದೆ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ- ಕೈ ವಕ್ತಾರ ಲಕ್ಷ್ಮಣ್ ವ್ಯಂಗ್ಯ

ಮೈಸೂರು : ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ತುಟಿಯ ಬಣ್ಣ ಬಳಿಯಾಗಿ ಬದಲಾಗಿದ್ದು, ಶಾಸಕ ಮುನಿರತ್ನ ಹೆಚ್ಐವಿ ಇಂಜೆಕ್ಷನ್ ಇಂಜೆಕ್ಟ್ ಮಾಡಿಸಿರಬಹುದು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೋ ಹೆಣ್ಣು ಮಗಳ ಮೂಲಕ ಅಶೋಕ್ಗೆ ಇಂಜೆಕ್ಷನ್ ನೀಡಿರಬಹುದು. ಆದ್ದರಿಂದ ತುಟಿಯ ಬಣ್ಣ ಬದಲಾಗಿದೆ. ಯಾವುದಕ್ಕೂ ಅವರು ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಲಿ. ಅದು ಅವರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.ಅಶೋಕ್ ಅವರ ದೈಹಿಕ ಹಾಗೂ ತುಟಿ ಮತ್ತು ಕೈ ಬಣ್ಣವೂ ಬದಲಾಗುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಎಚ್ಐವಿ ಇಂಜೆಕ್ಷನ್ ಕೊಟ್ಟಿರಬಹುದು ಎಂದಿದ್ದು ಕಿಡಿಹೊತ್ತಿಸಿದೆ. ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿ, ಬಿಜೆಪಿ ನಾಯಕರ ಸುಮಾರು 200 ಸಿಡಿಗಳು ಇರಬಹುದು. ಆ ಸಿಡಿಯ ಮಹಾನಾಯಕ ಶಾಸಕ ಮುನಿರತ್ನ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.ಮುನಿರತ್ನ ಅನೇಕರಿಗೆ ಹೆಚ್ಐವಿ ಇಂಜೆಕ್ಷನ್ ಕೊಟ್ಟಿದ್ದಾನೆ. ಬಾಂಬೇ ಬಾಯ್ಸ್ ಸಿಡಿಯೂ ಇರಬಹುದು. ಆ ಪೈಕಿ ಮೈಸೂರಿನ ಎಂಎಲ್ಸಿ ಒಬ್ಬರ ಸಿಡಿಯೂ ಇರಬಹುದು ಅಂತಾ ಅನಿಸುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ