ಇತ್ತೀಚಿನ ಸುದ್ದಿ
Trending

ಗಿಡ ಮರಗಳು ಇದ್ದರೆ ಉತ್ತಮ ಗಾಳಿ, ಮಳೆ, ಉತ್ತಮ ವಾತಾವರಣ ಸಾಧ್ಯ: ಕರುಣಾಹರನ್

ಕೋಲಾರ ಎಲ್‌ಐಸಿ ಶಾಖೆಯಲ್ಲಿ ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗೆ ಹಿರಿಯ ಶಾಖಾಧಿಕಾರಿ ಕರುಣಾಹರನ್ ಸಸಿಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ರೀತಿಯಲ್ಲಿ ಪ್ರತಿಯೊಬ್ಬ ಎಲ್ ಐ ಸಿ ಪ್ರತಿನಿಧಿಯು ಕುಟುಂಬಗಳಿಗೆ ರಕ್ಷಣೆ ನೀಡುತ್ತಾ ಬರುತ್ತಿದ್ದಾರೆ. ಅದೇ ರೀತಿಯಾಗಿ ಗಿಡ ನೆಟ್ಟು ಪರಿಸರವನ್ನು ರಕ್ಷಣೆ ಮಾಡಬೇಕೆಂದರು. ಗಿಡ ಮರಗಳು ಇದ್ದರೆ ಮಳೆ, ವಾತಾವರಣದಲ್ಲಿ ಉತ್ತಮ ಗಾಳಿ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬ ಸಿಬ್ಬಂದಿ, ಪ್ರತಿನಿಧಿಗಳು ಮನೆಗಳ ಬಳಿ ಗಿಡಗಳನ್ನು ಬೆಳಸಬೇಕೆಂದರು.

ಈ ಸಂದರ್ಭದಲ್ಲಿ ನಿವೃತ್ತ ವಿಭಾಗಾಧಿಕಾರಿ ಮುರಳಿ ಮನೋಹರ್ ಗೀಡಗಳನ್ನು ನೀಡಿ ಎಲ್‌ಐಸಿ ಬಗ್ಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಗುರುಕೃಷ್ಣ, ಶಾಖಾಧಿಕಾರಿ ಕರುಣಾಹರನ್, ಮಾಲೂರು ಶಾಖಾಧಿಖಾರಿ ಕಿಶೋರ್ ಕುಮಾರ್, ಶ್ರೀನಿವಾಸಪುರ ಶಾಖಾಧಿಕಾರಿ ವಿಜಯಕುಮಾರಿ, ಅಭಿವೃದ್ಧಿ ಅಧಿಕಾರಿ ಬಾಲಚಂದ್ರ, ವಿಮಾ ಸಲಹೆಗಾರರ ನಂಜುಂಡಪ್ಪ, ಬಿ.ರವಿ.ಪ್ರಕಾಶ್, ಹಾಗೂ ಪ್ರತಿನಿಧಿಗಳು ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button