ಕ್ರೈಂ

ಚಿನ್ನ ಕಳ್ಳಸಾಗಾಣಿಕೆ: ಪತಿ ನೀಡಿದ ಸುಳಿವಿನಿಂದ ಡಿಆರ್​ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ರನ್ಯಾ ರಾವ್​?

ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.ನಟಿ ರನ್ಯಾ ರಾವ್ ಬಂಧನ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮಧ್ಯೆ ನಟಿ ರನ್ಯಾ ರಾವ್​ ಡಿಆರ್​​​ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಾಗಿದೆ. ರಾನ್ಯಾ ರಾವ್ ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿದ್ದರು, ಇದು ಡಿಆರ್​ಐ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೇ, ರನ್ಯಾ ರಾವ್​ ಪತಿಯೇ ಈ ಬಗ್ಗೆ ಡಿಆರ್​ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನವೂ ಇದೆ. ರನ್ಯಾ ರಾವ್​ ಒಂದೇ ವರ್ಷದಲ್ಲಿ 28 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ.ಚಿನ್ನ ಕಳ್ಳಸಾಗಾಣಿಕೆ (Gold Smuggling) ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್​ (Ranya Rao) ಸದ್ಯ ನಾಯಾಂಗ ಬಂಧನದಲ್ಲಿದ್ದಾರೆ. ಅಷ್ಟಕ್ಕೂ ನಟಿ ರನ್ಯಾ ರಾವ್​ ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಾಗಿದೆ. ನಟಿ ರನ್ಯಾ ರಾವ್​ ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಮದುವೆಯಾದ ನಂತರವೂ ತಮ್ಮ ವಿದೇಶ ಪ್ರಯಾಣವನ್ನು ಮುಂದುವರೆಸಿದ್ದರು.ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ವಿದೇಶಕ್ಕೆ ತೆರಳಿದ್ದರು. ಇದು, ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗಿತ್ತಂತೆ. ರನ್ಯಾ ರಾವ್​ ಪದೇ ಪದೆ ವಿದೇಶಕ್ಕೆ ಪ್ರಯಾಣ ಮಾಡುವ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳವಾಗಿದ್ದು, ವಿಚ್ಛೇದನ ಹಂತಕ್ಕೂ ತಲುಪಿತ್ತಂತೆ. ಈ ಹಿನ್ನೆಲೆಯಲ್ಲಿ ಚಿನ್ನ ಕಳ್ಳಸಾಗಾಣಿಕೆ ಬಗ್ಗೆ ಸ್ವತಃ ರನ್ಯಾ ರಾವ್​ ಪತಿಯೇ ಡಿಆರ್​ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.ನಟಿ ರನ್ಯಾ ರಾವ್​ ಹೆಚ್ಚು ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಇದು, ಡಿಐಆರ್​ ಅಧಿಕಾರಿಗಳಲ್ಲಿ ಅನುಮಾನ ಹುಟ್ಟುವಂತೆ ಮಾಡಿತ್ತು. ಹೀಗಾಗಿ, ರನ್ಯಾ ರಾವ್​ ಟ್ರಾವೆಲಿಂಗ್​ ಹಿಸ್ಟ್ರಿ ಮೇಲೆ ಡಿಐಆರ್ ಅಧಿಕಾರಿಗಳು ಕಳೆದ ಆರು ಕಣ್ಣಿಟ್ಟಿದ್ದರು. ನಟಿ ರನ್ಯಾ ರಾವ್ ಒಂದೇ ದಿನಕ್ಕೆ ದುಬೈಗೆ ಹೋಗಿ ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್​ ಮೇಲೆ ದೆಹಲಿಯ ಡಿಆರ್‌ಐ ಅಧಿಕಾರಿಗಳು ನಿಗಾ ಇಟ್ಟಿದ್ದರು. ಹೀಗಾಗಿ, ನಟಿ ರನ್ಯಾ ರಾವ್ ಡಿಆರ್​ಐ ಬಲೆಗೆ ಬಿದ್ದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.ಇನ್ನು, ಚಿನ್ನ ವ್ಯಾಪರಿಗಳ ದ್ವೇಷದಿಂದ ಮತ್ತು ಸಚಿವರೊಬ್ಬರು ದೆಹಲಿಯ ಅಧಿಕಾರಿಗಳಿಗೆ ನೀಡಿದ ಮಾಹಿತಿಯಿಂದ ರನ್ಯಾ ರಾವ್​ ಡಿಆರ್​ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾಳೆ ಎಂಬ ಅನುಮಾನವೂ ಇದೆ.ನಟಿ ರನ್ಯಾ ರಾವ್​ ಒಂದೇ ವರ್ಷದಲ್ಲಿ 28 ಬಾರಿ ವಿದೇಶಿ ಪ್ರಯಾಣ ಮಾಡಿದ್ದಳು. ಕಳೆದ 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದಳು. ಐದನೇ ಬಾರಿ ಪ್ರಯಾಣದ ವೇಳೆ ರನ್ಯಾ ರಾವ್ ಸಿಕ್ಕಿಬಿದ್ದಾಳೆ. ನಟಿ ರನ್ಯಾ ರಾವ್ ಬಂಧನದ ಬೆನ್ನಲ್ಲೆ ಮತ್ತೊಬ್ಬ ಆರೋಪಿಯನ್ನು ಡಿಆರ್​ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತವಾಗಿರುವ ಎರಡನೇ ಆರೋಪಿ ತರುಣ್ ಕೊಂಡಾರುರಾಜು ಗೊಲ್ಡ್ ಸ್ಮಗ್ಲಿಂಗ್​ನ ಕಿಂಗ್ ಪಿನ್ ಆಗಿದ್ದಾನೆ.ನಟಿ ರನ್ಯಾ ರಾವ್​ ಮುಖಾಂತರ ದುಬೈನಿಂದ ಬೆಂಗಳೂರಿಗೆ ತರುಣ್ ಚಿನ್ನ ತರಿಸುತ್ತಿದ್ದಿದ್ದನು. ಬೆಂಗಳೂರಿನಿಂದ ಹವಾಲ ಮೂಲಕ ಹಣ ದುಬೈಗೆ ಕಳುಹಿಸುತ್ತಿದ್ದನು. ಮತ್ತು ದುಬೈನಲ್ಲಿ ಚಿನ್ನ ಖರೀದಿ, ಟ್ರಾನ್ಸಪೋರ್ಟ್ ಖರ್ಚನ್ನು ತರುಣ್ ನೋಡಿಕೊಳ್ಳುತ್ತಿದ್ದಿದ್ದನು. ಐಪಿಎಸ್ ಅಧಿಕಾರಿ ಮಗಳಾದ ಹಿನ್ನೆಲೆಯಲ್ಲಿ ರನ್ಯಾ ರಾವ್​ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೇ ಹೊರ ಬರುತ್ತಾಳೆ. ಇದನ್ನು ತಿಳಿದ ತರುಣ ಆಕೆಯ ಜೊತೆ ಸೇರಿ ಚಿನ್ನ ಕಳ್ಳಸಾಗಾಣಿಕೆಗೆ ಪ್ಲಾನ್​ ಮಾಡಿದ್ದನು.



Related Articles

Leave a Reply

Your email address will not be published. Required fields are marked *

Back to top button